ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಕಟಾವಿಗೆ ಹೋದ ರೈತನ ಮನೆಗೆ ಕಳ್ಳನ ಎಂಟ್ರಿ!

ಕೋಲಾರ: ತೋಟದಲ್ಲಿ ಬೆಳೆ ಕಟಾವಿಗೆ ತೆರಳಿದ್ದ ರೈತನ ಮನೆಯಲ್ಲಿ, ಕಳ್ಳರು ಕೈಚಳಕ ತೋರಿಸಿರುವ ಘಟನೆ ಕೋಲಾರ ಜಿಲ್ಲೆ, ಮುಳಬಾಗಿಲು ತಾಲೂಕಿನ ಎನ್ ಕೊತ್ತೂರು ಗ್ರಾಮದಲ್ಲಿ ನಡೆದಿದೆ. ರೈತ ಯರ್ರಪ್ಪ ಎಂಬುವರ ತೋಟದಲ್ಲಿ ಬೆಳೆದಿದ್ದ ಗೆಣಸು ಕಟಾವಿಗೆ, ಪತ್ನಿ ಹಾಗು ಮಗನೊಂದಿಗೆ ತೆರಳಿದ್ದರು.

ಈ ವೇಳೆ ಹಾಡಹಗಲೆ ಹೊಂಚು ಹಾಕಿದ್ದ ಕಳ್ಳರು, ಮನೆಯ ಬೀಗ ಒಡೆದು, ಬೀರುದಲ್ಲಿದ್ದ ಬಂಗಾರದ ಸರ, ಒಂದು ಚಂದ್ರಹಾರ, 2 ಜೊತೆ ಓಲೆ, 2 ಉಂಗುರ ಹಾಗು 1.40 ಲಕ್ಷ ನಗದು ಕದ್ದಿದ್ದಾರೆ. ಈ ಬಗ್ಗೆ ರೈತ ಯರ್ರಪ್ಪ ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ‌.

Edited By : Nagaraj Tulugeri
PublicNext

PublicNext

21/04/2026 08:29 am

Cinque Terre

12.61 K

Cinque Terre

0

ಸಂಬಂಧಿತ ಸುದ್ದಿ