ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಹೆದ್ದಾರಿ ಪಕ್ಕದ ಬಸರಿ ಮರಕ್ಕೆ ಬೆಂಕಿ, ಸಂಚಾರದಲ್ಲಿ ಕ್ಷಣಿಕ ಆತಂಕ!

ಶಿವಮೊಗ್ಗ: ದಿಢೀರ್‌ ಬೆಂಕಿಗೆ ಬಸರಿ ಮರವೊಂದು ಆಹುತಿಯಾಗಿದೆ. ತೀರ್ಥಹಳ್ಳಿಯ ಕುಡುಮಲ್ಲಿಗೆ ಸಮೀಪ ರಾಷ್ಟ್ರೀಯ ಹೆದ್ದಾರಿ 169ರ ಪಕ್ಕದಲ್ಲಿದ್ದ ಮರದಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ.

ದಾರಿಯಲ್ಲಿ ಹೋಗುವವರು ಬೀಡಿ, ಸಿಗರೇಟು ಸೇದಿ ಎಸೆದಿರಬಹುದು ಅಥವಾ ಕಿಡಿಗೇಡಿಗಳು ಮರಕ್ಕೆ ಬೆಂಕಿ ಹಚ್ಚಿರಬಹುದು. ಬೇಸಿಗೆಯ ಬಿಸಿಲಿಗೆ ಒಣಗಿರುವ ತರಗೆಲೆಗಳಿಗೆ ಬೆಂಕಿ ತಗುಲಿ, ಅದು ಮರಕ್ಕೆ ವಿಸ್ತರಿಸಿದೆ ಎಂದು ಶಂಕಿಸಲಾಗಿದೆ. ಮರಕ್ಕೆ ಬೆಂಕಿ ಬಿದ್ದ ಪರಿಣಾಮ ಕೆಲ ಸಮಯ ರಸ್ತೆ ಸಂಚಾರ ವ್ಯತ್ಯಯವಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.

Edited By : Vijay Kumar
PublicNext

PublicNext

22/04/2026 12:08 pm

Cinque Terre

4.8 K

Cinque Terre

0

ಸಂಬಂಧಿತ ಸುದ್ದಿ