ಹುಬ್ಬಳ್ಳಿ: ಪಬ್ಲಿಕ್ ನೆಕ್ಸ್ಟ್ ಸುದ್ದಿ ವಾಹಿನಿಯು ಜನಮನ ಸೆಳೆಯುವಂತ ಜನಜಾಗೃತಿ ಸುದ್ದಿಗಳನ್ನು ಕೊಟ್ಟು, ಈಗ ಎಲ್ಲರಿಗಿಂತಲೂ ಮುಂಚೂಣಿಯಲ್ಲಿದೆ. ಮೊದಲೆಲ್ಲ ಪೇಪರ್ಗಳಲ್ಲಿ ಸುದ್ದಿ ಬಂದ್ರೆ ಸಾಕು ಎನ್ನುತ್ತಿದ್ದರು. ಈಗ ಪಬ್ಲಿಕ್ ನೆಕ್ಸ್ಟ್ ನಲ್ಲಿ ಸುದ್ದಿ ಬರಬೇಕೆಂದು ಕಾತುರದಿಂದ ಕಾಯುವ ಮಟ್ಟಿಗೆ ಪಬ್ಲಿಕ್ ನೆಕ್ಸ್ಟ್ ಬೆಳೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮೆಚ್ಚುಗೆ ವ್ಯಕ್ತಪಡಿಸಿದರು.
ಹುಬ್ಬಳ್ಳಿಯ ನವೀನ್ ಹೋಟೆಲ್ನಲ್ಲಿ ಹಮ್ಮಿಕೊಂಡಿದ್ದ ಪಬ್ಲಿಕ್ ನೆಕ್ಸ್ಟ್ ರತ್ನ ಪ್ರಶಸ್ತಿ-2026 ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರಹ್ಲಾದ ಜೋಶಿ ಅವರು, ಪಬ್ಲಿಕ್ ನೆಕ್ಸ್ಟ್ ಇಡೀ ರಾಜ್ಯಾದ್ಯಂತ ಆಯಾ ಜಿಲ್ಲೆಗಳಲ್ಲಿ ಸ್ಥಳೀಯ ಸುದ್ದಿಗಳನ್ನು ಬಿತ್ತರಿಸುವ ಮೂಲಕ ತನ್ನದೆಯಾದ ಆನ್ಲೈನ್ ಛಾಪು ಮೂಡಿಸಿದೆ ಎಂದು ಹೊಗಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/04/2026 09:10 pm
LOADING...