ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಕನಸಿನಕಟ್ಟೆಯಲ್ಲಿ ಗ್ರಾಮದಲ್ಲಿ ಹೆಬ್ಬಾವು ಪತ್ತೆ : ಉರಗ ತಜ್ಞರಿಂದ ರಕ್ಷಣೆ

ಶಿವಮೊಗ್ಗ : ಮನೆಯೊಂದರ ಸಮೀಪ ಕಾಣಿಸಿಕೊಂಡ ಹೆಬ್ಬಾವನ್ನು ಉರಗ ತಜ್ಞ ಸ್ನೇಕ್‌ ಕಿರಣ್‌ ರಕ್ಷಣೆ ಮಾಡಿದ್ದಾರೆ. ಭದ್ರಾವತಿ ತಾಲೂಕಿನ ಕನಸಿನಕಟ್ಟೆ ಗ್ರಾಮದ ರಾಜೇಂದ್ರ ಎಂಬುವರ ಮನೆ‌ ಸಮೀಪ ಹೆಬ್ಬಾವು ಕಾಣಿಸಿಕೊಂಡಿತ್ತು. ಹೆಬ್ಬಾವು ಕಂಡು ಕುಟುಂಬಸ್ಥರು ಹಾಗೂ ಸುತ್ತಮುತ್ತಲಿನ ಜನ ಭಯಭೀತರಾಗಿದ್ರು. ಹೆಬ್ಬಾವು ಕಾಣಿಸಿಕೊಂಡ ಕೂಡಲೇ ಸ್ಥಳೀಯರು ಸ್ನೇಕ್‌ ಕಿರಣ್‌ಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ನೇಕ್‌ ಕಿರಣ್‌ ಕಾರ್ಯಾಚರಣೆ ನಡೆಸಿ ಸುಮಾರು ಏಳೂವರೆ ಅಡಿ ಉದ್ದದ ಹೆಬ್ಬಾವು ರಕ್ಷಣೆ ಮಾಡಿದ್ದಾರೆ. ಈ ಹಾವು 9 ಕೆಜಿ 500 ಗ್ರಾಂ ತೂಕವಿತ್ತು. ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಹೆಬ್ಬಾವನ್ನು ಸಮೀಪದ ಅರಣ್ಯಕ್ಕೆ ಬಿಡಲಾಗಿದೆ.

Edited By : Manjunath H D
PublicNext

PublicNext

14/06/2026 06:52 pm

Cinque Terre

15.51 K

Cinque Terre

0

ಸಂಬಂಧಿತ ಸುದ್ದಿ