ಹುಬ್ಬಳ್ಳಿ: ಶ್ರೀ ಸಿಮೆಂಟ್ ವತಿಯಿಂದ ಹೈದರಾಬಾದ್ನ ರಾಮೋಜಿ ಫಿಲಂ ಸಿಟಿಯಲ್ಲಿ ಅದ್ದೂರಿಯಾಗಿ ಆಯೋಜಿಸಲಾದ, ವರ್ಣರಂಜಿತ ಸಮೃದ್ಧಿ ಉತ್ಸವ ಕಾರ್ಯಕ್ರಮದಲ್ಲಿ, ಸರ್ವಧರ್ಮ ಸಮಾಜ ಸೇವಕರು ಖ್ಯಾತ ಉದ್ಯಮಿ ಡಾ. ರಮೇಶ್ ಮಹಾದೇವಪ್ಪನವರ ಅವರಿಗೆ "ಡಿಸ್ಟ್ರಿಕ್ ಸೇಲ್ಸ್ ಟಾಪರ್ ಅವಾರ್ಡ್ (District Sales Topper Award)" ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಮುಖ್ಯಸ್ಥರಾದ ಚನ್ನಬಸಪ್ಪ ಬುಮಾ, ಅರುಣ್ ಪಾಟೀಲ್, ರಮೇಶ್ ಪಾಟೀಲ್, ವಿಶ್ವನಾಥ್ ಪ್ಯಾಟಿ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಗಮಿಸಿದ ಶ್ರೀ ಸಿಮೆಂಟ್ನ ಡೀಲರ್ಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ಈ ಗೌರವಕ್ಕೆ ಕಾರಣರಾದ ಶ್ರೀ ಸಿಮೆಂಟ್ ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ಸಹೋದ್ಯೋಗಿಗಳಿಗೆ, ಡೀಲರ್ ಬಂಧುಗಳಿಗೆ, ಗ್ರಾಹಕರಿಗೆ ಹಾಗೂ ಕುಟುಂಬದವರಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ತಿಳಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/07/2026 07:12 pm
LOADING...