ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಕೋಮು ಸಾಮರಸ್ಯ ಮೆರೆದ ಡಿವೈಎಸ್ಪಿ ಸಮೀವುಲ್ಲಾ

ಹಾವೇರಿ: ಮುಸ್ಲಿಂ ಸಮುದಾಯದ ಡಿವೈಎಸ್ಪಿಯೊಬ್ಬರು ಸತ್ಯನಾರಾಯಣ ಪೂಜೆ ಮಾಡುವ ಮೂಲಕ ಭಾವೈಕ್ಯತೆ ಸಂದೇಶ ನೀಡಿದ್ದಾರೆ.

ಹಾವೇರಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಡಿವೈ ಎಸ್ ಪಿ ಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಮೀವುಲ್ಲಾ ಅವರು ಕೋಮು ಸಾಮರಸ್ಯ ನೀಡಿದ ಅಧಿಕಾರಿ.

ಪೊಲೀಸ್ ಅಧಿಕಾರಿ ಸಮೀವುಲ್ಲಾ ಕುಟುಂಬ ಸಮೇತ ಕಚೇರಿಗೆ ಆಗಮಿಸಿ ಹಿಂದೂ ಸಂಪ್ರದಾಯದಂತೆ ಸತ್ಯನಾರಾಯಣ ಪೂಜೆ ಸಲ್ಲಿಸಿದ್ದಾರೆ. ಗಣೇಶ ಚತುರ್ಥಿ ಅಂಗವಾಗಿ ಸತ್ಯನಾರಾಯಣ ಪೂಜೆ ಏರ್ಪಡಿಸಲಾಗಿತ್ತು.

ದಂಪತಿಯ ಈ ಕಾರ್ಯ ಉಳಿದ ಅಧಿಕಾರಿಗಳಿಗೆ ಮಾದರಿಯಾಗಿದೆ. ಹಿರಿಯ ಅಧಿಕಾರಿಗಳು ಸಮೀವುಲ್ಲಾ ಅವರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By :
PublicNext

PublicNext

18/09/2026 04:40 pm

Cinque Terre

13.15 K

Cinque Terre

1

ಸಂಬಂಧಿತ ಸುದ್ದಿ