", "articleSection": "Nature,Agriculture", "image": { "@type": "ImageObject", "url": "https://prod.cdn.publicnext.com/s3fs-public/229640-1750953338-ag.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Divakar Siddapur" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಸಿದ್ದಾಪುರ: ಸಿರ್ಸಿ-ಸಿದ್ದಾಪುರ ತಾಲೂಕುಗಳಲ್ಲಿ ಮುಂದುವರಿದ ಭಾರಿ ಮಳೆಯಿಂದಾಗಿ, ಪ್ರಸಿದ್ಧ ಅಘನಾಶಿನಿ ನದಿಯು ಅಪಾಯದ ಮಟ್ಟ ಮೀರಿ ತುಂಬಿ ಹರಿಯುತ...Read more" } ", "keywords": "Siddapur flood news, Aghanashini river overflow, Siddapur flood situation, river flood affects roads and fields, monsoon floods in Siddapur.", "url": "https://dashboard.publicnext.com/node" } ಸಿದ್ದಾಪುರ: ತುಂಬಿ ಹರಿಯುತ್ತಿರುವ ಅಘನಾಶಿನಿ ನದಿ - ರಸ್ತೆ, ಗದ್ದೆಗಳಿಗೆ ನುಗ್ಗಿದ ಪ್ರವಾಹದ ನೀರು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದಾಪುರ: ತುಂಬಿ ಹರಿಯುತ್ತಿರುವ ಅಘನಾಶಿನಿ ನದಿ - ರಸ್ತೆ, ಗದ್ದೆಗಳಿಗೆ ನುಗ್ಗಿದ ಪ್ರವಾಹದ ನೀರು

ಸಿದ್ದಾಪುರ: ಸಿರ್ಸಿ-ಸಿದ್ದಾಪುರ ತಾಲೂಕುಗಳಲ್ಲಿ ಮುಂದುವರಿದ ಭಾರಿ ಮಳೆಯಿಂದಾಗಿ, ಪ್ರಸಿದ್ಧ ಅಘನಾಶಿನಿ ನದಿಯು ಅಪಾಯದ ಮಟ್ಟ ಮೀರಿ ತುಂಬಿ ಹರಿಯುತ್ತಿರುವ ದೃಶ್ಯ ಶಿರಸಿ ತಾಲೂಕಿನ ಕೊಂಡಲಗಿಯಲ್ಲಿ ಕಂಡುಬಂದಿದೆ. ಈ ನದಿ ಸಿದ್ದಾಪುರ ಮತ್ತು ಶಿರಸಿ ತಾಲ್ಲೂಕುಗಳನ್ನು ದಾಟಿ ಕುಮಟದಲ್ಲಿ ಸಮುದ್ರಕ್ಕೆ ಸೇರುತ್ತದೆ.

ಕೊಂಡಲಗಿಯಲ್ಲಿ ಗದ್ದೆಗಳಿಗೆ ನೀರು ನುಗ್ಗಿದ್ದು, ರಸ್ತೆಗಳು ಕೂಡ ಹೊಳೆಯ ನೀರಿನಿಂದ ಆವೃತವಾಗಿವೆ. ಇದನ್ನೆಲ್ಲಾ ಸ್ಥಳೀಯ ಗ್ರಾಮಸ್ಥರು ಕುತೂಹಲದಿಂದ ವೀಕ್ಷಿಸುತ್ತಿರುವ ದೃಶ್ಯಗಳು ಗಮನಸೆಳೆಯುವಂತಿವೆ.

ಗದ್ದೆಗಳಲ್ಲಿ ನೀರು ತುಂಬುತ್ತಿದ್ದಂತೆ, ಯುವಕರು ಬಲೆ ಬೀಸಿ ಮೀನು ಹಿಡಿಯುತ್ತಿರುವ ದೃಶ್ಯಗಳು ವಿಭಿನ್ನವಾಗಿ ಕಾಣಿಸಿವೆ. ಸಿದ್ದಾಪುರ ತಾಲೂಕಿನ ಸರಕುಳಿ ಸೇತುವೆ ಬಳಿ ನೀರು ಉಕ್ಕಿ ಹರಿಯುವ ಸಾಧ್ಯತೆ ಉಂಟಾಗಿದ್ದು, ಒಂದು ವೇಳೆ ಸೇತುವೆ ಮೇಲೆ ನೀರು ಹರಿದರೆ ಗೋಳಿಮಕ್ಕಿ–ಸಿರ್ಸಿ ಸಂಪರ್ಕ ಕಡಿತಗೊಳ್ಳುವ ಆತಂಕ ಮೂಡಿದೆ.

Edited By : Manjunath H D
Kshetra Samachara

Kshetra Samachara

26/06/2025 09:25 pm

Cinque Terre

17.32 K

Cinque Terre

0

ಸಂಬಂಧಿತ ಸುದ್ದಿ