ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಇಂದು ಧಾರ್ಮಿಕ ಸೌಹಾರ್ದತೆಯ ಸುಂದರ ಸಂಗಮವೊಂದು ಅನಾವರಣಗೊಂಡಿದೆ. ಆಕಾಶದಲ್ಲಿ ಮೂಡಿದ ಚಂದ್ರ ಎರಡು ವಿಭಿನ್ನ ಸಂಸ್ಕೃತಿಗಳ ಸಂಭ್ರಮಕ್ಕೆ ಸಾಕ್ಷಿಯಾದನು. ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಜೆ ಚಂದ್ರದರ್ಶನವಾಗುತ್ತಿದ್ದಂತೆ ಮುಸ್ಲಿಂ ಬಾಂಧವರಲ್ಲಿ ಸಡಗರ ಮನೆಮಾಡಿದೆ. ಪವಿತ್ರ ರಂಜಾನ್ ಮಾಸದ ಉಪವಾಸದ ನಂತರ ಇಂದು ಚಂದ್ರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಾಳೆ ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸಲು ಸಕಲ ಸಿದ್ಧತೆಗಳು ನಡೆದಿವೆ. ಮಸೀದಿಗಳಲ್ಲಿ ಪ್ರಾರ್ಥನೆ ಹಾಗೂ ಶುಭಾಶಯಗಳ ವಿನಿಮಯದೊಂದಿಗೆ ಹಬ್ಬದ ಕಳೆ ಕಳೆಗಟ್ಟಿದೆ.
ಇನ್ನೊಂದೆಡೆ, ಯುಗಾದಿಯ ಸಂಭ್ರಮದಲ್ಲಿರುವ ಹಿಂದೂ ಬಾಂಧವರು ಕೂಡ ಸಂಜೆ ಚಂದ್ರನನ್ನು ಕಂಡು ಭಕ್ತಿಪೂರ್ವಕವಾಗಿ ನಮಿಸಿದರು. ಹೊಸ ವರ್ಷದ ಆಗಮನದ ಸಂಕೇತವಾಗಿ ಬೇವು-ಬೆಲ್ಲ ಸವಿದು, ಜೀವನದ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಸಂಕಲ್ಪ ಮಾಡಿದರು. ಒಂದೇ ಆಕಾಶದಲ್ಲಿ ಮೂಡಿದ ಚಂದ್ರನನ್ನು ಕಂಡು ಎರಡು ಸಮುದಾಯಗಳು ತಮ್ಮ ತಮ್ಮ ಸಾಂಪ್ರದಾಯಿಕ ಹಬ್ಬಗಳನ್ನು ಆಚರಿಸುತ್ತಿರುವುದು ಕಾಫಿನಾಡಿನ ಜನರಲ್ಲಿ ಭಾವೈಕ್ಯತೆಯ ಮೆರುಗನ್ನು ಹೆಚ್ಚಿಸಿದೆ.
PublicNext
20/03/2026 07:37 pm
LOADING...