ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ಭಕ್ತಿ-ಭಾವದ ಸಮ್ಮಿಲನ - ಮುಸ್ಲಿಂ ಬಾಂಧವರಿಂದ ಈದ್ ಆಚರಣೆ

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಪವಿತ್ರ ರಂಜಾನ್ ಹಬ್ಬದ ಸಂಭ್ರಮವು ಸಡಗರ ಹಾಗೂ ಸೌಹಾರ್ದತೆಯಿಂದ ಕಳೆಗಟ್ಟಿತ್ತು. ಕೆಂಪನಹಳ್ಳಿಯ ಬಡ ಮಕಾನ್‌ನಲ್ಲಿ ಹಬ್ಬದ ಪ್ರಯುಕ್ತ ಏರ್ಪಡಿಸಲಾಗಿದ್ದ ವಿಶೇಷ ಸಾಮೂಹಿಕ ಪ್ರಾರ್ಥನೆಯಲ್ಲಿ ಸಾವಿರಾರು ಸಂಖ್ಯೆಯ ಮುಸ್ಲಿಂ ಬಾಂಧವರು ಪಾಲ್ಗೊಂಡು ಭಕ್ತಿಯಿಂದ ನಮಾಜ್ ಸಲ್ಲಿಸಿದರು. ​

ಬೆಳಿಗ್ಗೆಯಿಂದಲೇ ಮಕಾನ್‌ನತ್ತ ತಂಡೋಪತಂಡವಾಗಿ ಆಗಮಿಸಿದ ಜನರಲ್ಲಿ ಹಬ್ಬದ ಉತ್ಸಾಹ ಎದ್ದುಕಾಣುತ್ತಿತ್ತು. ವಿಶೇಷವಾಗಿ ಪುಟ್ಟ ಮಕ್ಕಳು ಬಣ್ಣಬಣ್ಣದ ಹೊಸ ಬಟ್ಟೆಗಳನ್ನು ಧರಿಸಿ, ಟೋಪಿ ತೊಟ್ಟು ಪೋಷಕರೊಂದಿಗೆ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದು ಎಲ್ಲರ ಗಮನ ಸೆಳೆಯಿತು.

ಮಕಾನ್ ಆವರಣದಲ್ಲಿ ಮೊಳಗಿದ ವಿಶೇಷ ಪ್ರಾರ್ಥನೆಯು ಶಾಂತಿ ಮತ್ತು ಭ್ರಾತೃತ್ವದ ಸಂದೇಶವನ್ನು ಸಾರಿತು. ಪ್ರಾರ್ಥನೆಯ ನಂತರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡ ದೃಶ್ಯಗಳು ಕಂಡು ಬಂದವು.

Edited By : PublicNext Desk
PublicNext

PublicNext

21/03/2026 07:15 pm

Cinque Terre

5.79 K

Cinque Terre

0

ಸಂಬಂಧಿತ ಸುದ್ದಿ