ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದುಷ್ಕರ್ಮಿಗಳಿಂದ ರೈತನ ಹೊಲದಲ್ಲಿದ್ದ ಸೋಲಾರ್ ಪ್ಯಾನಲ್ ಧ್ವಂಸ: ಬೀದಿಗೆ ಬಿದ್ದ ರೈತ

ಶಿಗ್ಗಾವಿ:ರೈತನೊಬ್ಬ ಸಾಲಸೋಲ ಮಾಡಿ ಬೋರ್‌ವೆಲ್‌ಗೆ ವಿದ್ಯುತ್ ಸರಬರಾಜಿಗಾಗಿ ಹೊಲದಲ್ಲಿ ಹಾಕಿಸಿದ್ದ ಸೋಲಾರ್ ಪ್ಯಾನಲ್‌ಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ ಘಟನೆ ಶಿಗ್ಗಾವಿ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.

ಹೊಸೂರು ಗ್ರಾಮದ ಯಲ್ಲಪ್ಪ ಹೊಸಮನಿ ಎಂಬ ರೈತ ನಾಲ್ಕು ಎಕರೆ ಜಮೀನು ಹೊಂದಿದ್ದು, ಸುಮಾರು ₹4 ಲಕ್ಷ ಸಾಲ ಮಾಡಿ ತನ್ನ ಜಮೀನಿಗೆ ಸೋಲಾರ್ ಅಳವಡಿಸಿದ್ದರು. ಈಗ ದುಷ್ಕರ್ಮಿಗಳು ಈ ಸೋಲಾರ್ ಪ್ಯಾನಲ್‌ಗಳನ್ನು ಹೊಡೆದು ಹಾಳು ಮಾಡಿದ್ದು, ರೈತ ಕಣ್ಣೀರು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಘಟನಾ ಸ್ಥಳಕ್ಕೆ ತಡಸ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Edited By :
Kshetra Samachara

Kshetra Samachara

22/07/2026 06:07 pm

Cinque Terre

13.28 K

Cinque Terre

0

ಸಂಬಂಧಿತ ಸುದ್ದಿ