ಹಾನಗಲ್ : ಹಾವೇರಿ ಜಿಲ್ಲಾಡಳಿತದ ನಿಷೇಧಾಜ್ಞೆಯ ನಡುವೆಯೂ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ನಿಯಮ ಉಲ್ಲಂಘಿಸಿ ಡಿಜೆ ಬಳಸಿದ್ದಕ್ಕಾಗಿ ಪೊಲೀಸರು ಸೌಂಡ್ ಸಿಸ್ಟಂ ಹಾಗೂ ಡಿಜೆ ಸಾಗಿಸುತ್ತಿದ್ದ ವಾಹನವನ್ನು ಜಪ್ತಿ ಮಾಡಿರುವ ಘಟನೆ ತಾಲೂಕಿನ ಗಿರಿಶಿನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಶನಿವಾರ ರಾತ್ರಿ 10 ಗಂಟೆಯ ಸುಮಾರಿಗೆ ಗಿರಿಶಿನಕೊಪ್ಪ ಗ್ರಾಮದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಜಿಲ್ಲಾಡಳಿತದ ಸೂಚನೆ ಹಾಗೂ ಕಟ್ಟುನಿಟ್ಟಿನ ನಿಷೇಧಾಜ್ಞೆಯನ್ನು ಮೀರಿ ಡಿಜೆ ಸೌಂಡ್ ಸಿಸ್ಟಂ ಬಳಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಹಾನಗಲ್ ಠಾಣೆಯ ಪೊಲೀಸರು, ಮೆರವಣಿಗೆಯಲ್ಲಿದ್ದ ಡಿಜೆ ಸೌಂಡ್ ಸಿಸ್ಟಂ ಹಾಗೂ ಅದನ್ನು ಸಾಗಿಸುತ್ತಿದ್ದ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿಶಿನಕೊಪ್ಪ ‘ಕಾ’ ರಾಜಾ ಗಣಪತಿ ಮಂಡಳಿಯ 5ರಿಂದ 6 ಸದಸ್ಯರು ಹಾಗೂ ‘ಮಾರಿಕಾಂಬಾ ಸೌಂಡ್ ಸಿಸ್ಟಂ’ ಮಾಲೀಕ ಗುತ್ತೇಪ್ಪ ಗೋರಕ್ಕನವರ್ ವಿರುದ್ಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-ಲೋಕೇಶ್ ಸುಣಗಾರ್, ಪಬ್ಲಿಕ್ ನೆಕ್ಸ್ಟ್, ಹಾನಗಲ್
PublicNext
20/09/2026 12:03 pm
LOADING...